ವಿ.ಪಿ.ಕಂಬೈನ್ಸ್ ಲಾಂಛನದಡಿಯಲ್ಲಿ ವಿ.ಶ್ರೀನಿವಾಸ್ (ನಾಗೇನಹಳ್ಳಿ) ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ನಮ್ಮೂರ ಹೈಕ್ಳು ಚಿತ್ರದ ಮಾತಿನ ಮರುಲೇಪನ ಕಾರ್ಯವು ನಗರದ ಚಾಮುಂಡೇಶ್ವರಿ ಸ್ಟುಡಿಯೋವಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿತು.
ಚಿತ್ರದ ರೀರಿಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯವು ಮೇ ಮೊದಲ ವಾರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕ ಶ್ರೀನಿವಾಸ್ ತಿಳಿಸಿದ್ದಾರೆ.
ಚಿತ್ರಕ್ಕೆ ಮನು ಛಾಯಾಗ್ರಹಣ, ಶಕೀಲ್ ಅಹಮ್ಮದ್ ಸಂಗೀತ, ಕಲೈ, ರಘು ನೃತ್ಯ, ಥ್ರಿಲ್ಲರ್ ಮಂಜು ಸಾಹಸ, ವೇಣು ನಿರ್ಮಾಣ ಮೇಲ್ವಿಚಾರಣೆಯಿದ್ದು, ಚಿತ್ರದ ಕಥೆ ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನ ಪ್ರಸನ್ನ ಚಿತ್ರದ ಸಹ ನಿರ್ಮಾಪಕರು ರಂಗರಾಜು ಹಾಸನ್.
ತಾರಾಗಣದಲ್ಲಿ ಮಜಾ ಟಾಕೀಸ್ನ ಪವನ್, ಕುರಿಸುನೀಲ್, ತೇಜಸ್ ರಘುಹಾಸನ್, ವಿನಯ್ರಾಮ್, ಮಮತಾ ರಾವುತ್, ದೀಪ್ತಿ ಮನ್ನೆ, ರಚಿತಾ, ಅಣ್ಣಯ್ಯ, ಸುಚೇಂದ್ರ ಪ್ರಸಾದ್, ರಮೇಶ್ ಭಟ್, ಎಂ.ಎಸ್. ಉಮೇಶ್, ಚಿಕ್ಕಣ್ಣ, ಬಿರಾದಾರ್ ಮುಂತಾದವರಿದ್ದು ವಿಶಿಷ್ಟ ಪಾತ್ರವೊಂದರಲ್ಲಿ ಸತ್ಯಜಿತ್ ಕಾಣಿಸಿಕೊಳ್ಳಲಿದ್ದಾರೆ.
ಬಬ್ರುವಾಹನ ಈ ವಾರ ತೆರೆಗೆ